ಸದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ವಶದಲ್ಲಿದ್ದ ಭೀಮಾನಾಯಕ್ ಅವರ ವಿರುದ್ಧ ಸುರೇಶ್ ಅವರು ಕಳೆದ ಡಿಸೆಂಬ್ 12ರಂದು ರಾಮನಗರದ ಐಜೂರು ಪೊಲೀಸ್ ಠಾಣೆ ದೂರು ನೀಡಿದ್ದು, ದೂರಿನಲ್ಲಿ ಭೀಮಾನಾಯಕ್ ಅವರು 50 ಲಕ್ಷ ರುಪಾಯಿ ಕಪ್ಪು ಹಣ ಬಿಳಿ ಮಾಡಲು ಬಂದಿದ್ದ ವೇಳೆ ರಾಮನಗರದ ಎಪಿಎಂಸಿ ಯಾರ್ಡ್ ಬಳಿ ತನ್ನನ್ನು ಅಪಹರಿಸಿ ಹಲ್ಲೆಗೆ ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು.