ಕಳೆದ ವರ್ಷ ಅಕ್ಟೋಬರ್ ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಠಾಣೆಯ ಪಿಎಸ್ ಐ ಜಗದೀಶ್ ಅವರು ತಮ್ಮ ಸಿಬ್ಬಂದಿ ಜತೆಗೂಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸೆರೆಹಿಡಿಯಲು ಬೆನ್ನಟ್ಟಿದ್ದಾಗ ನೆಲಮಂಗಲದ ಗ್ರಾನೈಟ್ ಕಾರ್ಖಾನೆ ಬಳಿ ದುಷ್ಕರ್ಮಿಗಳು ಜಗದೀಶ್ ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.