ಈಗಾಗಲೇ ಎಸ್ ಐಟಿ ಈ ಕುರಿತು 500 ಪುಟಗಳ ವರದಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಲ್ಲಿಸಿದೆ. ಪುತ್ರ ಅಶ್ವಿನ್ ರಾವ್, ಅಮಾನತುಗೊಂಡಿರುವ ಪಿಆರ್ ಓ ಸಯ್ಯದ್ ರಿಜಾಯ್ ಮತ್ತು ಇತರೆ ಆರೋಪಿಗಳು ಸೇರಿಕೊಂಡು ಲೋಕಾಯುಕ್ತರ ಅಧಿಕೃತ ನಿವಾಸಕ್ಕೆ ಅಧಿಕಾರಿಗಳನ್ನು ಕರೆಸಿಕೊಂಡು ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ನ್ಯಾ.ಭಾಸ್ಕರ್ ರಾವ್ ಅವರಿಗೆ ಮಾಹಿತಿ ಇದ್ದರೂ, ತಡೆಯುವಲ್ಲಿ ವಿಫಲರಾಗಿದ್ದಾರೆ.