''ನನ್ನ ಇಬ್ಬರೂ ಮಕ್ಕಳು ವೈಟ್ ಫೀಲ್ಡ್ ಹತ್ತಿರ ಖಾಸಗಿ ಶಾಲೆಯೊಂದರಲ್ಲಿ ಕಳೆದ ವರ್ಷ ಆರ್ ಟಿಇಯಡಿ ದಾಖಲಾಗಿದ್ದರು. ನನ್ನಲ್ಲಿ 12 ಸಾವಿರ ರೂಪಾಯಿ ಕಟ್ಟಿ ಎಂದು ಶಾಲೆ ಕಡೆಯಿಂದ ಸೂಚನೆ ಬಂತು. ಆದರೆ ಅಷ್ಟು ಹಣ ಕಟ್ಟಲು ನನ್ನಿಂದ ಸಾಧ್ಯವಾಗಲಿಲ್ಲ. 5 ಸಾವಿರ ರೂಪಾಯಿ ಕಟ್ಟಿ ರಸೀದಿ ಪಡೆದೆ, ಶಾಲೆಯ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದರಿಂದ ಈಗ ನನ್ನ ಮಕ್ಕಳು ಶಾಲೆಗೆ ಹೋಗುವುದಿಲ್ಲ'' ಎನ್ನುತ್ತಾರೆ ಮಾರತಹಳ್ಳಿಯ ಗುಂಡಪ್ಪ.