ತನ್ನ ತಂದೆ ಡಿವೈಎಸ್ಪಿ ಗಣಪತಿ ಸಾವಿಗೂ ಮುನ್ನ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಆಧಾರದಲ್ಲಿ ಸಚಿವ ಕೆ.ಜೆ.ಜಾರ್ಜ್, ಲೋಕಾಯುಕ್ತ ಐ.ಜಿ.ಪಿ. ಪ್ರಣವ್ ಮೊಹಾಂತಿ, ರಾಜ್ಯ ಗುಪ್ತದಳದ ಎಡಿಜಿಪಿ ಎ.ಎಂ.ಪ್ರಸಾದ್ ಅವರಿಗೆ ಕಾನೂನು ರೀತ್ಯ ಸಮನ್ಸ್, ನೋಟೀಸ್ ನೀಡಬೇಕು. ಈ ಮೂವರು ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದದ್ದಾಗಿ ತನ್ನ ತಂದೆ ಸಾಯುವ ಮುನ್ನ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಇವರ ಕಿರುಕುಳದಿಂದಾಗಿಯೇ ತನ್ನ ತಂದೆ ಗಣಪತಿ ಸಾವನ್ನಪ್ಪಿದ್ದಾರೆ ಎಂದೂ ನೇಹಲ್ ಗಣಪತಿ ದೂರಿನಲ್ಲಿ ಆರೋಪಿಸಿದ್ದಾರೆ.