ಮೈಸೂರು :ಎರಡು ಚಿರತೆಗಳಿಗೆ ವಿಷವಿಕ್ಕಿ ಕೊಂದ ಗ್ರಾಮಸ್ಥರು

ಸತ್ತ ನಾಯಿಗೆ ವಿಷ ಹಾಕಿ ಎರಡು ಚಿರತೆಗಳನ್ನು ಗ್ರಾಮಸ್ಥರು ಕೊಂದಿರುವ ಘಟನೆ ಬಂಡೀಪುರ ಬಳಿಯ ಹಂಚಿಪುರದ ಗ್ರಾಮದಲ್ಲಿ ಮಂಗಳವಾರ ನಡೆದಿದೆ...
ಮೃತ ಚಿರತೆ
ಮೃತ ಚಿರತೆ
Updated on

ಮೈಸೂರು: ಸತ್ತ ನಾಯಿಗೆ ವಿಷ ಹಾಕಿ ಎರಡು ಚಿರತೆಗಳನ್ನು ಗ್ರಾಮಸ್ಥರು ಕೊಂದಿರುವ ಘಟನೆ ಬಂಡೀಪುರ ಬಳಿಯ ಹಂಚಿಪುರದ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಬಂಡಿಪುರ ಹುಲಿ ರಕ್ಷಿತಾರಣ್ಯದ ಅಂಚಿನ ಗ್ರಾಮವಾದ ಇಲ್ಲಿನ ಶಿವಚನ್ನಯ್ಯ ಎಂಬುವರ ತೋಟದಲ್ಲಿ ಅಪರೂಪದ ಕರಿ ಚಿರತೆ ಮತ್ತು ಚುಕ್ಕೆ ಚಿರತೆ ಸಾವನ್ನಪ್ಪಿವೆ. ಚಿರತೆಗಳು ಗ್ರಾಮದಿಂದ ಹೊತ್ತೂಯ್ದು ತಿಂದು ಉಳಿಸಿದ್ದ ಮೃತ ನಾಯಿಯ ಶವಕ್ಕೆ ವಿಷ ಹಾಕಲಾಗಿತ್ತು. ಆ ನಾಯಿಯನ್ನು ತಿಂದ ಚಿರತೆಗಳು ಸಾವನ್ನಪ್ಪಿವೆ.

ಚಿರತೆಗಳು ಬಿದ್ದಿರುವ ವಿಷಯ ತಿಳಿದ ಸ್ಥಳೀಯ ಫಾರೆಸ್ಟ್ ಆಫೀಸರ್ ನವೀನ್ ಕುಮಾರ್ ಕೂಡಲೇ ಗ್ರಾಮಕ್ಕೆ ಆಗಮಿಸಿದ್ದಾರೆ. ಅವುಗಳನ್ನು ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿ ಚಿರತೆಗಳು ಸಾವನ್ನಪ್ಪಿವೆ. ಎರಡು ಚಿರತೆಗಳು ಸಹೋದರುಗಳಾಗಿದ್ದು, ಒಂದೂವರೆ ವರ್ಷದ ವಯಸ್ಸಿನ ಚಿರತೆಗಳಾಗಿವೆ.

ಗ್ರಾಮದಲ್ಲಿ ಚಿರತೆ ದಾಳಿಯಿಂದ ಸಾಕಷ್ಟು ಹಸು, ಕುರಿಗಳು ಬಲಿಯಾಗಿವೆ. ಈ ಬಗ್ಗೆ ದೂರು ನೀಡಿದರು ಸಂಬಂಧಿತ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಬಂದಿರಲಿಲ್ಲ. ಚಿರತೆಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com