ಬೆಂಗಳೂರು: ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಾ. ಅಪ್ಪಾಜಿಗೌಡ ಪುನಾರಾಯ್ಕೆ

ಕುತೂಹಲಕ್ಕೆ ಕಾರಣವಾಗಿದ್ದ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಡಾ. ಅಪ್ಪಾಜಿಗೌಡ ಅವರು ...
ಡಾ.ಅಪ್ಪಾಜಿ ಗೌಡ
ಡಾ.ಅಪ್ಪಾಜಿ ಗೌಡ

ಬೆಂಗಳೂರು: ಕುತೂಹಲಕ್ಕೆ ಕಾರಣವಾಗಿದ್ದ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣೆ  ನಡೆದಿದ್ದು, ಅಧ್ಯಕ್ಷರಾಗಿ ಡಾ. ಅಪ್ಪಾಜಿಗೌಡ ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದ ಉಪಕಾರ್ಯದರ್ಶಿಯಾಗಿ ಶಶಿಕಿರಣ್ ಮತ್ತು ಪ್ರಸನ್ನ, ಕಾರ್ಯದರ್ಶಿಯಾಗಿ ಮಂಜುನಾಥ ಸಿ, ಜಂಟಿ ಕಾರ್ಯದರ್ಶಿಯಾಗಿ ನಾರಾಯಣ ಮೂರ್ತಿ, ಖಜಾಂಚಿಯಾಗಿ ಡಿ.ಸಿ.ಕಾಳೇಗೌಡ ಮತ್ತು ಗೌರವ ಕಾರ್ಯದರ್ಶಿಯಾಗಿ ಬಾಲಕೃಷ್ಣೇಗೌಡ ಆಯ್ಕೆಯಾಗಿದ್ದಾರೆ.

ಮೆಡಿಕಲ್ ಸಿಟ್ ಹಗರಣದಲ್ಲಿ  ಅಪ್ಪಾಜಿಗೌಡ ವಿರುದ್ಧ ಚಾರ್ಜ್ ಸಿಟ್ ಸಲ್ಲಿಕೆಯಾಗಿದೆ. ಅವರು 20 ನಿರ್ದೇಶಕರಿಗೆ ಆಮಿಷ ಒಡ್ಡಿ ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದಾರೆ ಎಂದು ಒಕ್ಕಲಿಗ ಮುಖಂಡರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com