ಪತ್ನಿಯನ್ನು ಕೊಂದು ರಕ್ತಸಿಕ್ತ ಮಚ್ಚಿನೊಂದಿಗೆ ಪೊಲೀಸರಿಗೆ ಶರಣಾದ ಪತಿ

29 ವರ್ಷದ ವ್ಯಕ್ತಿಯೊಬ್ಬ ರಕ್ತಸಿಕ್ತ ಮಚ್ಚಿನೊಂದಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯೊಳಗೆ ಹೋದಾಗ ಅಲ್ಲಿದ್ದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 29 ವರ್ಷದ ವ್ಯಕ್ತಿಯೊಬ್ಬ ರಕ್ತಸಿಕ್ತ ಮಚ್ಚಿನೊಂದಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯೊಳಗೆ ಹೋದಾಗ ಅಲ್ಲಿದ್ದ ಪೊಲೀಸರು ನಿಜಕ್ಕೂ ಗಾಬರಿಯಾದರು. ಆತ ತನ್ನ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾಗಲು ಬಂದಿದ್ದ.
ಆರೋಪಿ ಪುನೀತ್ ಕುಮಾರ್ ವೃತ್ತಿಯಲ್ಲಿ ಚಾಲಕನಾಗಿದ್ದು, ಕೆಲ ವರ್ಷಗಳ ಹಿಂದೆ ಪಲ್ಲವಿ ಎಂಬಾಕೆಯನ್ನು ವಿವಾಹವಾಗಿದ್ದ. ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಕೌಟುಂಬಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ನಿನ್ನೆ ರಾತ್ರಿ ಊಟವಾದ ಬಳಿಕ ಕೌಟುಂಬಿಕ ವಿವಾದ ಸಂಬಂಧ ದಂಪತಿ ಜಗಳ ಮಾಡಿಕೊಂಡಿದ್ದರು. ಸಿಟ್ಟಿನಿಂದ ಪುನೀತ್ ಪಲ್ಲವಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ. ಇಂದು ನಸುಕಿನ ವೇಳೆ ರಕ್ತದ ಕಲೆಯಾಗಿದ್ದ ಮಚ್ಚು ಹಿಡಿದುಕೊಂಡು ಪೊಲೀಸರ ಮುಂದೆ ಶರಣಾಗಲು ಹಾಜರಾದ.
ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆಯಲ್ಲಿ ಇರುವ ಪುನೀತ್ ಮನೆಗೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಆಸ್ಪತ್ರೆಗೆ ವರ್ಗಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com