ಇನ್ಸ್ಪೆಕ್ಟರ್ ಸಂಜೀವ್ ಗೌಡ ಅವರು ಆರೋಪಿಗಳು ಹಾಗೂ ಠಾಣೆಯ ಸಿಬ್ಬಂದಿಗಳ ಮುಂದೆ ಬಾಯಿಗೆ ಬಂದಂತೆ ನಿಂದಿಸಿದ್ದರಿಂದ ನನಗೆ ಮಾನಸಿಕ ಕಿರುಕುಳ ಉಂಟಾಗಿತ್ತು. ಈ ಹಿಂದಿನ ಇನ್ಸ್ಪೆಕ್ಟರ್ ಅವರು ನನ್ನನ್ನು ಬಂದೋಬಸ್ತ್ ಹಾಗೂ ತನಿಖೆ ಎಂದು ಬೇರೆ ಬೇರೆ ಕರ್ತವ್ಯಗಳಿಗೆ ನೇಮಿಸುತ್ತಿದ್ದರು. ಆದರೆ, ಸಂಜೀವ್ ಗೌಡ ನನ್ನನ್ನು ಪ್ರಕರಣಗಳ ತನಿಖೆ ನಡೆಸಲು ಠಾಣೆಯಿಂದ ಹೊರಗಡೆ ಕಳುಹಿಸುತ್ತಿರಲಿಲ್ಲ. ಹೀಗಾಗಿ ನಾನು ವರ್ಗಾವಣೆಯನ್ನು ಬಯಸಿದ್ದೆ ಎಂದು ಹೇಳಿಕೊಂಡಿದ್ದಾರೆ.