ಮದ್ಯದ ಅಮಲಿನಲ್ಲಿದ್ದ ರಮಾನಾಥ್ ರೈ ಪುತ್ರ ದೀಪಕ್ ರೈ ಹಾಗೂ ಸ್ನೇಹಿತರು ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲದ ಎಸ್ಟೇಟ್ ಬಳಿ ಕಾರು ನಿಲ್ಲಿಸಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ವೇಳೆ ಬುದ್ಧಿ ಹೇಳಿದ ಕಾಫಿ ತೋಟದ ಮಾಲೀಕನೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ನಾನು ಮಿನಿಷ್ಟರ್ ಮಗ, ನಿಮ್ಮನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ದೀಪಕ್ ರೈ ಧಮ್ಕಿ ಹಾಕಿದಾಗ ಸ್ಥಳೀಯರು ಥಳಿಸಿ ಶ್ರೀಮಂಗಲ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.