ಅಲ್ಲದೆ ಇಂದಿನ ಮಾತುಕತೆ ವಿಫಲವಾದಲ್ಲಿ ಎಸ್ಮಾ ಕಾಯ್ದೆಯನ್ನು ಜಾರಿಗೆ ತರುವ ಬೆದರಿಕೆಯೊಡ್ಡಿದೆ ಸರ್ಕಾರ.ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಇಕೆಆರ್ ಟಿಸಿ ಮತ್ತು ಎಡಬ್ಲ್ಯುಕೆಆರ್ ಟಿಸಿ ನೌಕರರು ನಿನ್ನೆ ಕರೆ ನೀಡಿದ್ದ ಬಂದ್ ನಿಂದಾಗಿ ಹಲವು ಕಡೆಗಳಲ್ಲಿ ಕಲ್ಲು ತೂರಾಟ, ಬಸ್ಸಿಗೆ ಬೆಂಕಿ ಹಚ್ಚಿದ್ದರಿಂದ ಹಾನಿಯುಂಟಾಗಿರುವುದಲ್ಲದೆ ಸುಮಾರು 17 ಕೋಟಿ ರೂಪಾಯಿ ಇಲಾಖೆಗೆ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಸುಮಾರು 150 ಬಸ್ಸುಗಳು ಹಾನಿಗೀಡಾಗಿವೆ.