ಬೆಂಗಳೂರು: ಜೂನ್ 1 ರಂದು ಬಿಇಎಂಎಲ್ ಲೇಔಟ್ ನಲ್ಲಿ ನಡೆದಿದ್ದ ಒಂಟಿ ಮಹಿಳೆ ಕೊಲೆ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಸಂದೀಪ್, ರವೀಶ್, ಗುರುಮೂರ್ತಿ, ಮತ್ತು ರಘು ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಹತ್ಯೆಗೀಡಾದ ಮಹಿಳೆ ಪತಿ ಸತ್ಯಮೂರ್ತಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಬಂಧಿತ ಆರೋಪಿ ರಘು ತಂದೆ ಕೆಲಸ ಮಾಡುತ್ತಿದ್ದರು. ಇವರು ಸತ್ಯಮೂರ್ತಿ ಕುಟುಂಬದ ಸ್ನೇಹಿತರಾಗಿದ್ದರು. ಸತ್ಯಮೂರ್ತಿ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ರಘು ಕಣ್ಣು ಬಿದ್ದಿತ್ತು. ಹೀಗಾಗಿ ಸ್ನೇಹಿತರ ಜೊತೆಗೂಡಿ ದರೋಡೆಗೆಸಂಚು ನಡೆಸಿದ್ದ.
ಕದ್ದ ಚಿನ್ನವನ್ನು ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದರು. ಲಕ್ಷ್ಮಿ ರಾಜ್ಯಂ ಅವರ ಕೊಲೆ ಹಣಕ್ಕಾಗಿ ನಡೆದಿದೆ ಎಂದು ಶಂಕಿಸಿದ ಪೊಲೀಸರು ಸತ್ಯಮೂರ್ತಿ ಕುಟುಂಬಸ್ಥರ ಪರಿಚಯಸ್ಥರನ್ನೇಲ್ಲಾ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
Advertisement