ಯೋಗೇಶಗೌಡ ಕೊಲೆ ಕೇಸ್: ಐವರು ಆರೋಪಿಗಳು 2 ದಿನ ಪೊಲೀಸ್ ವಶಕ್ಕೆ

ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣಕ್ಕೆಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಐವರು ಆರೋಪಿಗಳನ್ನು...
ಯೋಗೇಶಗೌಡ
ಯೋಗೇಶಗೌಡ
Updated on
ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣಕ್ಕೆಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಐವರು ಆರೋಪಿಗಳನ್ನು ಕೋರ್ಟ್ ಶನಿವಾರ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಯೋಗೇಶಗೌಡ ಕೊಲೆ ಪ್ರಕರಣ ಸಂಬಂಧ ಬಸವರಾಜ ಮುತಗಿ, ವಿನಾಯಕ ಕಟಗಿ, ವಿಕ್ರಮ್ ಬಳ್ಳಾರಿ, ಕೀರ್ತಿಕುಮಾರ್ ಕುರಹಟ್ಟಿ ಹಾಗೂ ಸಂದೀಪ್ ಎಂಬ ಆರೋಪಿಗಳನ್ನು ನಿನ್ನೆ ಧಾರವಾಡ ಪೊಲೀಸರು ಬಂಧಿಸಿದ್ದರು. ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 
ಯೊಗೀಶಗೌಡ ಗೌಡರ ಅವರನ್ನು ಬುಧವಾರ ಬೆಳಗ್ಗೆ ದುಷ್ಕರ್ವಿುಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ ಹತ್ಯೆ ಮಾಡಿದ್ದರು. ಧಾರವಾಡ ಜಿಲ್ಲಾ ಪಂಚಾಯತಿಯ ಹುಬ್ಬಳಿ ಕ್ಷೇತ್ರದಿಂದ ಯೊಗೀಶಗೌಡ ಆಯ್ಕೆಯಾಗಿದ್ದರು. ಬುಧವಾರ ಬೆಳಗ್ಗೆ ಯೊಗೀಶಗೌಡ ಧಾರವಾಡ ಸಪ್ತಾಪೂರದಲ್ಲಿರುವ ಉದಯ ಹೆಲ್ತ್ ಕ್ಲಬ್, ಫಿಟ್ ನೆಸ್ ಸೆಂಟರ್​ಗೆ ತೆರಳಿದ್ದಾಗ ಅವರ ಹತ್ಯೆ ಮಾಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com