ಬೆಂಗಳೂರು: ವಿಶ್ವವಿದ್ಯಾಲಯಗಳು ನೀಡುತ್ತಿರುವ ಗೌರವ ಡಾಕ್ಟರೇಟ್ ಗಳು ತನ್ನ ಮೌಲ್ಯ ಕಳೆದುಕೊಳ್ಳುತ್ತಿವೆ. ಸಿಕ್ಕಸಿಕ್ಕವರಿಗೆ ಬೇಕಾಬಿಟ್ಟಿಯಾಗಿ ಪದವಿ ಪ್ರದಾನ ಮಾಡಲಾಗುತ್ತಿವೆ. ಎಂದು ರಾಜ್ಯಪಾಲ ವಜೂಭಾಯಿ ರೂಢಾಬಾಯಿ ವಾಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಣ, ಜಾತಿ, ರಾಜಕೀಯ, ಪ್ರಭಾವಗಳಿಂದ ಲಾಬಿ ನಡೆಸಿ ಗೌರವ ಡಾಕ್ಟರೇಟ್ ಪಡೆದುಕೊಳ್ಳುತ್ತಾರೆ. ಇದಕ್ಕೆ ವಿಶ್ವವಿದ್ಯಾಲಯವೂ ಕಾರಣವಾಗುತ್ತದೆ ಎಂದರು.
ವಿಶ್ವ ವಿದ್ಯಾಲಯಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡುವಾಗ ಯಾವ ಮಾನದಂಡ ಅನುಸರಿಸುತ್ತೀರಿ? ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರಿಗೆ ಡಾಕ್ಟರೇಟ್ ಪ್ರದಾನ ಮಾಡಿದ್ದೀರಿ. ಅವರ ಸೇವೆಯಿಂದ ಸಮಾಜಕ್ಕೆ ಏನು ಉಪಯೋಗ, ಯಾವ ಆಧಾರದಲ್ಲಿ ನೀವು ಅವರಿಗೆ ಡಾಕ್ಟರೇಟ್ ನೀಡಿದ್ದೀರಿ ಎಂದು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ಅವರು ಒಬ್ಬ ವ್ಯಕ್ತಿಗೆ ಗೌರವ ಡಾಕ್ಟರೇಟ್ ನೀಡಲು 8 ಅಂಶಗಳ ಮಾನದಂಡವನ್ನು ಸೂಚಿಸಿದ್ದಾರೆ. ಅವುಗಳೆಂದರೆ ವಿವಿ ಸಿಂಡಿಕೇಟ್ ನಿಂದ ಹೆಸರುಗಳ ಶಿಫಾರಸು ಆಗಬೇಕು, ರಾಜ್ಯಪಾಲರಿಂದಲೇ ನೂತನ ಪರಿಶೀಲನಾ ಸಮಿತಿ ರಚಿಸಬೇಕು. ಡಾಕ್ಟರೇಟ್ ಪಟ್ಟಿ ಅಂತಿಮಗೊಳಿಸಲು ಪರಿಶೀಲನಾ ಸಮಿತಿ ನೇಮಕ ಮಾಡಬೇಕು. ಮೂರಕ್ಕಿಂತ ಹೆಚ್ಚು ಸಲ ಗಣ್ಯರ ಶಿಫಾರಸ್ಸು ಮಾಡಬಾರದು ಹಾಗೂ ಘಟಿಕೋತ್ಸವಕ್ಕೆ 45 ದಿನ ಬಾಕಿ ಇರುವಾಗಲೇ ಪಟ್ಟಿ ಅಂತಿಮಗೊಳಿಸಿಯಾಗಬೇಕೆಂಬುದೇ ರಾಜ್ಯಪಾಲರ ನಿಯಮವಾಗಿದೆ.
Advertisement