ಇಡ್ಲಿಗೆ ಸರಿಯಾಗಿ ಚಟ್ನಿ ಹಾಕದ ಹೊಟೆಲ್ ಮಾಲಿಕನಿಗೆ ಚೂರಿ ಹಾಕಿದ!

ಇಲ್ಲೊಬ್ಬ ವ್ಯಕ್ತಿ, ತಾನು ಕೇಳಿದಷ್ಟು ಚೆಟ್ನಿ ಹಾಕಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹೊಟೆಲ್ ಮಾಲಿಕನಿಗೆ ಚೂರಿ ಹಾಕಿದ್ದಾನೆ!
ಇಡ್ಲಿಗೆ ಸರಿಯಾಗಿ ಚಟ್ನಿ ಹಾಕದ ಮಾಲಿಕನಿಗೆ ಚೂರಿ ಹಾಕಿದ!
ಇಡ್ಲಿಗೆ ಸರಿಯಾಗಿ ಚಟ್ನಿ ಹಾಕದ ಮಾಲಿಕನಿಗೆ ಚೂರಿ ಹಾಕಿದ!
Updated on

ಬೆಂಗಳೂರು: ಹೊಟೆಲ್ ಗಳಲ್ಲಿ ಸರಿಯಾದ ಸೇವೆ ಸಿಗದೇ ಇದ್ದರೆ, ಮಾಲಿಕರನ್ನು ಪ್ರಶ್ನಿಸಿತ್ತೇವೆ, ಇಲ್ಲವೇ ಮನಸ್ಸಿನಲ್ಲೇ ಬೈದು ಸುಮ್ಮನಾಗುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ, ತಾನು ಕೇಳಿದಷ್ಟು ಚೆಟ್ನಿ ಹಾಕಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹೊಟೆಲ್ ಮಾಲಿಕನಿಗೆ ಚೂರಿ ಹಾಕಿದ್ದಾನೆ!
ನೀಲಸಂದ್ರದ ರೋಸ್ ಗಾರ್ಡನ್ ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಹೊಟೆಲ್ ಮಾಲೀಕ ಸೋಮಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಿಗ್ಗೆ 8 ಗಂಟೆ ವೇಳೆಗೆ ಸೋಮಶೇಖರ್ ಅವರ ಹೊಟೆಲ್ ಗೆ ಬಂದಿದ್ದ ಡೇವಿಡ್ ಎಂಬಾತ ಇಡ್ಲಿಗೆ ಆರ್ಡರ್ ಮಾಡಿ ಹೆಚ್ಚು ಚಟ್ನಿ ಹಾಕುವಂತೆ ಕೇಳಿದ್ದಾನೆ. ಒಂದು ಬಾರಿ ಚಟ್ನಿ ಹಾಕಿದ ಸೋಮಶೇಖರ್ ಗೆ ಮತ್ತಷ್ಟು ಚಟ್ನಿ ಹಾಕುವಂತೆ ಡೇವಿಡ್ ಕೇಳಿದ್ದಾನೆ, ಆದರೆ ಹೊಟೆಲ್ ಮಾಲಿಕ ಸೋಮಶೇಖರ್ ಮತ್ತೊಮ್ಮೆ ಚಟ್ನಿ ಹಾಕಲು ತಡ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಡೇವಿಡ್ ಸೋಮಶೇಖರ್ ಅವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ.
ಚಿಕಿತ್ಸೆ ಪಡೆಯುತ್ತಿರುವ ಸೋಮಶೇಖರ್ ಅವರ ಸ್ಥಿತಿ ಗಂಭೀರವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ವಿವೇಕ್ ನಗರ ಪೊಲೀಸರು ಆರೋಪಿ ಡೇವಿಡ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com