ಜೆಯುಸಿಎಂಎಸ್(JU-CMS)ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ‘ಸಂಸ್ಕೃತಿ – ಕನಸಿಗೊಂದು ಮುನ್ನುಡಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏಪ್ರಿಲ್ 6 ರಂದು ಕುನ್ನಿಂಗಹ್ಯಾಮ್ ರಸ್ತೆಯಲ್ಲಿರುವ ಅಲಯಾನ್ಸ್ ಫ್ರಾಂಸ್ಯೆ ಡಿಯಲ್ಲಿ ಹಮ್ಮಿಕೊಂಡಿದ್ದಾರೆ. ಫೋಟೋಗ್ರಫಿ, ನೃತ್ಯ, ಸಂಗೀತ ಮತ್ತು ನಾಟಕಗಳ ಮೂಲಕ ಕಲಾ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಿಂದ ಸಂಗ್ರಹವಾಗುವ ಎಲ್ಲ ಹಣವು ಅನಾಥಾಶ್ರಮಕ್ಕೆ ಸೇರಲಿದೆ. ಅಂದು ಪರಿಸರವಾದಿ ‘ಸಾಲುಮರದ ತಿಮ್ಮಕ್ಕ’ರವರನ್ನು ಸನ್ಮಾನಿಸಲಾಗುವುದು.