ಪೈಪ್ ಲೈನ್ ಒಡೆದು ವ್ಯರ್ಥವಾಯ್ತು 19 ಲಕ್ಷ ಲೀಟರ್ ಅಮೂಲ್ಯವಾದ ನೀರು

ಪೈಪ್ ಲೈನ್ ಒಡೆದು ಸುಮಾರು 19 ಲಕ್ಷ ಲೀಟರ್ ಅಮೂಲ್ಯವಾದ ನೀರು ವ್ಯರ್ಥವಾಗಿರುವ ಘಟನೆ ಬೆಳಗಾವಿಯ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ....
ಪೈಪ್ ಲೈನ್ ಒಡೆದಿದ್ದರಿಂದ ನೀರಿನಿಂದ ಹಾನಿಗೊಳಗಾಗಿರುವ ಮನೆ
ಪೈಪ್ ಲೈನ್ ಒಡೆದಿದ್ದರಿಂದ ನೀರಿನಿಂದ ಹಾನಿಗೊಳಗಾಗಿರುವ ಮನೆ
Updated on

ಬೆಳಗಾವಿ: ಬರದಿಂದ ತತ್ತರಿಸಿರುವ ರಾಜ್ಯದ ಜನತೆ ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಪೈಪ್ ಲೈನ್ ಒಡೆದು ಸುಮಾರು 19 ಲಕ್ಷ ಲೀಟರ್  ಅಮೂಲ್ಯವಾದ ನೀರು ವ್ಯರ್ಥವಾಗಿರುವ ಘಟನೆ ಬೆಳಗಾವಿಯ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ.

ಮುಚ್ಚಂಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹಿಡಕಲ್ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್​ಲೈನ್ ಒಡೆದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೂರಾರು ಅಡಿ ಎತ್ತರಕ್ಕೆ ನೀರು ಚಿಮ್ಮಿದ ರಭಸಕ್ಕೆ 4 ಮನೆ ಸಂಪೂರ್ಣ ಜಲಾವೃತಗೊಂಡಿವೆ.

ಮಂಗಳವಾರ ರಾತ್ರಿ 2 ಗಂಟೆಯ ಸುಮಾರಿಗೆ ಪೈಪ್​ಲೈನ್ ಒಡೆದು ದೇವಪ್ಪ ಜಾಧವ, ವಿನೋದ ಕುಳಚಗೌಡ, ನಾರಾಯಣ ಜಕ್ಕಾಣಿ ಹಾಗೂ ಬಸವಂತ ಬಂಗಾರೆ ಅವರ ಮನೆಗೆ ನೀರು ನುಗ್ಗಿದೆ. ನಾಲ್ಕು ಮನೆಗಳು ಜಲಾವೃತಗೊಂಡಿವೆ. ಮೇಲ್ಛಾವಣಿ, ಗೋಡೆಗಳೆಲ್ಲ ಕುಸಿದು ಬಿದ್ದಿವೆ.

ಮಳೆ ಬರುತ್ತಿರಬರಹುದು ಎಂದು ಭಾವಸಿದ ಅವರಿಗೆ ಹೊರಗಡೆ ಬಂದು ನೋಡುವಷ್ಟರಲ್ಲಿ ಪರಿಸ್ಥಿತಿಯ ಅರಿವಾಗಿದೆ. ಕೂಡಲೇ ಮನೆಯಲ್ಲಿ ಕಟ್ಟಿದ್ದ ಜಾನುವಾರಗಳನ್ನು ದೂರಕ್ಕೆ ಎಳೆದೊಯ್ದಿದ್ದಾರೆ. ಇನ್ನು ಈ ಕುಟುಂಬದವರು ಬೆಳೆದಿದ್ದ ಜೋಳ, ಸೌತೇಕಾಯಿ, ಹೂಕೋಸು, ಎಲೆಕೋಸು ಮುಂತಾದ ಬೆಳೆಗಳೆಲ್ಲಾ ಹಾನಿಯಾಗಿವೆ.

ಮನೆಯೊಳಗಿದ್ದ ಟಿವಿ, ಫ್ರಿಡ್ಜ್, ಫರ್ನೀಚರ್, ಪಾತ್ರೆ, ಸಾಮಾನು ಸರಂಜಾಮು ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿವೆ, ಜಲಮಂಡಳಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

1998ರಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ಹಿಡಕಲ್ ಜಲಾಶಯದಿಂದ ಲಕ್ಷ್ಮೀಟೇಕ್ ಪಂಪ್​ಹೌಸ್​ವರೆಗೆ 1,168 ಮಿ.ಮೀ. ವ್ಯಾಸದ ಪೈಪ್​ಲೈನ್ ಅಳವಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com