ಮೂರು ಪುಟಗಳ ಮಧ್ಯಮಂತರ ವರದಿ ಸಲ್ಲಿಸಿರುವ ಸುಭಾಷ್ ಚಂದ್ರ, ನಾಪತ್ತೆಯಾಗಿದ್ದ 40 ಕಡತಗಳ ಪೈಕಿ 30 ದೊರಕಿದ್ದು, ಇನ್ನು 10 ಕಡತಗಳು ಪತ್ತೆಯಾಗಿಲ್ಲ. ಹಾಗಾಗಿ, ನಾಪತ್ತೆಯಾಗಿರುವ ಕಡತಗಳು ಯಾವುವು? ಯಾವ ಕಾರಣಕ್ಕೆ ನಾಪತ್ತೆಯಾಗಿವೆ? ಯಾವ ಅಧಿಕಾರಿಗಳು ಕಾರಣರು ಎಂಬ ಎಲ್ಲ ಅಂಶಗಳ ಕುರಿತು ತನಿಖೆ ನೆಡಸಿ ವರದಿ ನೀಡಲು ಎರಡು ದಿನಗಳ ಕಾಲಾವಕಾಶ ನೀಡಬೇಕು ಎಂದು ಸಚಿವರನ್ನು ವಿನಂತಿಸಿಕೊಂಡಿದ್ದಾರೆ.