ಬೆಂಗಳೂರು: ಪತ್ನಿಯ ಮೊಬೈಲ್ ನಲ್ಲಿದ್ದ ಸಂದೇಶಗಳನ್ನು ನೋಡಿ ವ್ಯಕ್ತಿಯೊಬ್ಬ ತನ್ನ ಕೈ ಬೆರಳಿಗೆ ಸಂಚಕಾರ ತಂದುಕೊಂಡಿದ್ದಾನೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ.
ಸಾಫ್ಟ್ ವೇರ್ ಇಂಜಿನಿಯರ್ ಚಂದ್ರಕಾಂತ್ ಪತ್ನಿ ಸುನೀತಾ ಸಿಂಗ್ (ಶಿಕ್ಷಕಿ) ಅಗತ್ಯಕ್ಕಿಂತ ಹೆಚ್ಚು ಮೊಬೈಲ್ ನಲ್ಲೇ ಕಾಲಹರಣ ಮಾಡುತ್ತಿದ್ದಳು. ಇದರಿಂದ ಅನುಮಾನಗೊಂಡ ಪತಿ ಪತ್ನಿಯ ಮೊಬೈಲ್ ನಲ್ಲಿದ್ದ ಮೆಸೇಜ್ ಗಳನ್ನು ನೋಡಿದ್ದಾರೆ. ಇದರಲ್ಲಿ ಅಶ್ಲೀಲ ಮೆಸೇಜ್ ಇದ್ದದ್ದನ್ನು ಕಂಡಾಗ ಪತಿ ಚಂದ್ರಕಾಂತ್- ಪತ್ನಿ ಸುನೀತಾ ಸಿಂಗ್ ನಡುವೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಸುನೀತಾ ಸಿಂಗ್ ಚಾಕುವಿನಿಂದ ಪತಿಯ ಮೂರು ಬೆರಳುಗಳನ್ನು ಕತ್ತರಿಸಿದ್ದಾಳೆ. ಅಷ್ಟೇ ಅಲ್ಲದೇ ಪತಿಗೆ ಜೀವ ಬೆದರಿಕೆ ಹಾಕಿದ್ದಾಳೆ. ಕ್ರೂರ ಪತ್ನಿಯ ವಿರುದ್ಧ ಈಗ ಸಂಬಂಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಂದ್ರಕಾಂತ್ ಸಿಂಗ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement