ರಾಮ್ ನಾಥ್ ಗೋಯೆಂಕಾ ಪ್ರಶಸ್ತಿಗೆ ಭಾಜನರಾದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತ ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಅವರಿಗೆ ಪ್ರತಿಷ್ಟಿತ ರಾಮ್ ನಾಥ್ ಗೋಯೆಂಕಾ ಪ್ರಶಸ್ತಿ...
ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್
ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತ ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಅವರಿಗೆ ಪ್ರತಿಷ್ಟಿತ ರಾಮ್ ನಾಥ್ ಗೋಯೆಂಕಾ ಪ್ರಶಸ್ತಿ ದೊರೆತಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಬೆಂಗಳೂರಿನ ಪ್ರಧಾನ ಪ್ರತಿನಿಧಿಯಾಗಿರುವ ಕ್ರಿಸ್ಟಿನ್ ಅವರಿಗೆ ಪ್ರಕಾಶ್ ಕಾರ್ಡ್ಲೆ ಮೆಮೋರಿಯಲ್ ಪ್ರಶಸ್ತಿಯೂ  ಲಭಿಸಿದೆ. ಚೆನ್ನೈನ ನಾಗರಿಕ ಸಮಸ್ಯೆಗಳ ಕುರುತು ಮಾಡಿದ ವರದಿಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಪ್ರಶಸ್ತಿಯನ್ನ ನವದೆಹಲಿಯಲ್ಲಿ ಪ್ರಧಾನ ಮಾಡಿದ್ದರು.

ಗೋಯೆಂಕಾ ಪ್ರಶಸ್ತಿಯನ್ನು 28 ವಿಭಾಗಗಳಲ್ಲಿ  ಕೊಡಲಾಗುತ್ತದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ರಾಮ್ ನಾಥ್ ಗೊಯೆಂಕಾ ಅವರ ಸ್ಮರಣಾರ್ಥ 2005 ರಿಂದ ಪತ್ರಿಕೋದ್ಯಮ ಪ್ರಶಸ್ತಿ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com