ಹೆಚ್ಚಿನ ಮುಖಬೆಲೆಯ ನೋಟುಗಳ ನಿಷೇಧದಿಂದ ಸಾಮಾನ್ಯ ನಾಗರಿಕರು ಪರದಾಡುತ್ತಿರುವುದರ ಮಧ್ಯೆ ಆಡಂಭರದ ಮದುವೆಗೆ ಸಮಾಜದ ಹಲವು ವರ್ಗಗಳಿಂದ ಟೀಕೆ ಕೇಳಿಬರುತ್ತಿರುವುದರುವುದು ಒಂದೆಡೆಯಾದರೆ ನಿನ್ನೆಯ ಮದುವೆಯಲ್ಲಿ ಹಲವು ತೊಂದರೆಗಳು ಎದುರಾದವು. ಅರಮನೆ ಮೈದಾನದ ಒಳಗೆ ಪಾರ್ಕಿಂಗ್ ಸಮಸ್ಯೆ, ಊಟದ ಹಾಲ್ ನಲ್ಲಿ ಸೂಕ್ತ ವ್ಯವಸ್ಥೆ ಕೊರತೆ, ಬಂದ ಜನರು ಅಲ್ಲಲ್ಲಿ ಉಗುಳುತ್ತಿದ್ದುದು, ಸಿಕ್ಕಸಿಕ್ಕಲ್ಲಿ ಪಾಕೆಟ್ ಗಳನ್ನು ಎಸೆಯುತ್ತಿದ್ದುದು, ಬಳ್ಳಾರಿ ರಸ್ತೆಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಇತ್ಯಾದಿಗಳು ಕಂಡುಬಂದವು. ಮದುವೆಗೆ ಆಗಮಿಸಿದ್ದ ಸಿನಿಮಾ ನಟರನ್ನು ನೋಡಲು ಮತ್ತಷ್ಟು ಜನ ಮುಗಿಬೀಳುತ್ತಿದ್ದರು.