ಸಂತರುಗಳಾದ ಬುದ್ಧ, ಬಸವ, ಕನಕ ಮತ್ತು ವಾಲ್ಮೀಕಿ ಜಯಂತಿ ಆಚರಣೆಗಳನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಬೇಕೆ ಹೊರತು ಸರ್ಕಾರಿ ರಜೆ ಕೊಡಬಾರದು.ಈ ಮೂಲಕ ಎಲ್ಲರೂ ಕೆಲಸ ಮಾಡಿ ರಾಜ್ಯದ ಆರ್ಥಿಕಾಭಿವೃದ್ಧಿಗೆ ಸಹಕರಿಸೋಣ. ಕೇಂದ್ರ ಸರ್ಕಾರ 500, 1000 ನೋಟುಗಳನ್ನು ನಿಷೇಧ ಮಾಡಿದ ನಂತರ ರಜಾ ದಿನಗಳಲ್ಲಿ ಕೂಡ ಬ್ಯಾಂಕ್ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.