ತುಮಕೂರಿನಲ್ಲಿ ಮಿತಿಮೀರಿದ ಹಳೇಯ ನೋಟುಗಳ ಅಕ್ರಮ ವಿನಿಮಯ?

ತುಮಕೂರಿನಲ್ಲಿ ಹಳೇಯ ನೋಟುಗಳ ಅಕ್ರಮ ವಿನಿಮಯ ಹೆಚ್ಚಾಗಿದೆ. ಈ ಸಂಬಂಧ ಪೊಲೀಸರು ಎರಡು ಪ್ರಕರಣಗಳಲ್ಲಿ ಹಲವರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತುಮಕೂರು:  ತುಮಕೂರಿನಲ್ಲಿ ಹಳೇಯ ನೋಟುಗಳ ಅಕ್ರಮ ವಿನಿಮಯ ಹೆಚ್ಚಾಗಿದೆ. ಈ ಸಂಬಂಧ ಪೊಲೀಸರು ಎರಡು ಪ್ರಕರಣಗಳಲ್ಲಿ ಹಲವರನ್ನು ಬಂಧಿಸಿದ್ದಾರೆ.

ಎರಡು ಖಾಸಗಿ ಬ್ಯಾಂಕ್ ಗಳ ಅಧಿಕಾರಿಗಳು ಹಳೇಯ ನೋಟುಗಳನ್ನು ಅಕ್ರಮವಾಗಿ ವಿನಿಮಯ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಎಚ್ ಡಿಎಫ್ ಸಿ ಬ್ಯಾಂಕ್ ನ ರಿಕವರಿ ಅಧಿಕಾರಿ ಉದಯ್ ಮತ್ತು ಚೋಳಮಂಡಳ ಫೈನಾನ್ಸ್ ನ ವಾಹನ ವಸೂಲಾತಿ ಅಧಿಕಾರಿ ಪದ್ನರಾಜ್ ಎಂಬುವರನ್ನು ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರು ವಸೂಲಾತಿ ಅಧಿಕಾರಿಗಳು ಗಿರಿನಗರದ ಗಣೇಶ ದೇವಾಲಯದಲ್ಲಿದ್ದಾಗ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 2 ಸಾವಿರ ಮುಖಬೆಲೆಯ 3 ಲಕ್ಷ ರು ಹಣವನ್ನು ವಶ ಪಡಿಸಿಕೊಂಡಿದ್ದಾರೆ.

ಇದೇ ವೇಳೆ ಕುಣಿಗಲ್ ಪೊಲೀಸರು ರವಿ ಮತ್ತು ಪ್ರಕಾಶ್ ಎಂಬುವರನ್ನು ಬಂಧಿಸಿ 6.06 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಇಬ್ಬರು ಶೇ. 20 ರಷ್ಟು ಕಮಿಷನ್ ಆಧಾರದ ಮೇಲೆ ಹಳೇಯ ನೋಟುಗಳನ್ನು ಬದಲಾಯಿಸಿಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com