ಇಂದು ಬೆಳಗ್ಗೆ ಮೈಸೂರು ಅರಮನೆಯಲ್ಲಿ ರಾಜ, ಮಹಾರಾಜರು ಹಿಂದೆ ಬಳಸುತ್ತಿದ್ದ ಆಯುಧಗಳಿಗೆ ಪೂಜೆ ನೆರವೇರಿಸಲಾಯಿತು. ರಾಜ ಯುದುವೀರ್ ಒಡೆಯರ್ ಅರಮನೆಯ ಕಲ್ಯಾಣ ಮಂಟಪದಲ್ಲಿ ಯುದ್ಧೋಪಕರಣಗಳು ಮತ್ತು ಆಯುಧಗಳಿಗೆ ಪೂಜೆ ನೆರವೇರಿಸಿದರು. ಬಳಿಕ ಅರಮನೆಯ ವಾಹನಗಳು, ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆಚ್ಚಿನ ಕಾರುಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.