ಬಿಜೆಪಿಗೆ ಶಿವರಾಂ ಸೇರ್ಪಡೆ ರಾಜಕೀಯವಾಗಿ ಭಾರೀ ಮಹತ್ವ ಪಡೆದಿದೆ.ಪಕ್ಷದಲ್ಲಿ ಅವರ ಪಾತ್ರದ ಬಗ್ಗೆ ಭರವಸೆ ನೀಡಿಲ್ಲವಾದರೂ ಕೂಡ, ದಲಿತರು ಮತ್ತು ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಬಿಜೆಪಿಯ ಮೂಲ ನೆಲೆಯನ್ನು ವಿಸ್ತರಿಸಿ ಬಲಪಡಿಸಲು ಶಿವರಾಂ ಅವರನ್ನು ಬಳಸಿಕೊಳ್ಳಲಾಗುವುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್.ಸಿ/ಎಸ್.ಟಿ ನಾಯಕರು ಸೇರಲು ನಾವು ನಿರೀಕ್ಷಿಸುತ್ತಿದ್ದೇವೆ. ಶಿವರಾಂ ಅವರ ಸೇವೆಯನ್ನು ದಲಿತರು, ಹಿಂದುಳಿದವರ ಸಂಘಟನೆಗೆ ಬಳಸಿಕೊಳ್ಳಲಾಗುವುದು. 2018ರ ವಿಧಾನಸಭೆ ಚುನಾವಣೆಯಲ್ಲಿ ಶಿವರಾಂ ಅವರು ದಲಿತ ಸಮುದಾಯವನ್ನು ತಲುಪಲು ಪ್ರಮುಖ ಪಾತ್ರ ವಹಿಸಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎನ್ನುತ್ತಾರೆ ಹಿರಿಯ ನಾಯಕರು.