ಇಂದು ಮಧ್ಯಾಹ್ನ 2.30ರ ಸುಮಾರಿಗೆ ಕೆಂಗಲ್ ಹನುಮಂತಯ್ಯ ಗೇಟ್ ಬಳಿ ಹಣ ಸಾಗಿಸುತ್ತಿದ್ದ ವೋಕ್ಸ್ ವ್ಯಾಗನ್ ಕಾರನ್ನು ತಡೆದ ಪೊಲೀಸರು, ಅದರಲ್ಲಿದ್ದ ಹಣವನ್ನು ಹಾಗೂ ಆ ಕಾರಿನ ಮಾಲೀಕ ಧಾರವಾಡ ಮೂಲದ ವಕೀಲ ಸಿದ್ದಾರ್ಥ ಎಂಬುವವರನ್ನು ವಶಕ್ಕೆ ಪಡೆದು ವಿಧಾನಸೌಧದ ಡಿಸಿಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.