ಹಣ ದೋಚಲು ವ್ಯಾಪಾರಿಗೆ ಪದೇ ಪದೇ ಬೆದರಿಕೆಯೊಡ್ಡುತ್ತಿದ್ದ ರಾಮಚಂದ್ರಾಪುರ ನಿವಾಸಿ ಕೆಂಪೇ ಗೌಡನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಕೆಂಪೇ ಗೌಡ ಅನಿಲ್ ಗೋಯಲ್ ಎಂಬ ಉತ್ತರಹಳ್ಳಿಯಲ್ಲಿ ವಾಸಿಸುತ್ತಿದ್ದ ಗ್ರಾನೈಟ್ ವ್ಯಾಪಾರಿಗೆ ಪದೇ ಪದೇ 20 ಲಕ್ಷ ರೂಪಾಯಿ ನೀಡುವಂತೆ ಕಿರುಕುಳ ನೀಡುತ್ತಿದ್ದ. ನಿನ್ನ ವಿರೋಧಿಗಳು ನನಗೆ 10 ಲಕ್ಷ ರೂಪಾಯಿ ನೀಡಿ ನಿನ್ನನ್ನು ಕೊಲ್ಲಲು ಹೇಳಿದ್ದಾರೆ, ರಕ್ಷಣೆ ನೀಡಬೇಕೆಂದು ಬೆದರಿಕೆಯೊಡ್ಡಿದ್ದಾನೆ. ಗೋಯಲ್ ಉತ್ತರಹಳ್ಳಿಯಲ್ಲಿ ಅಪಾರ್ಟ್ ಮೆಂಟಿನಲ್ಲಿ ವಾಸಿಸುತ್ತಿದ್ದು ಕೆಂಪೇ ಗೌಡ ಅದೇ ಕಟ್ಟಡದಲ್ಲಿ ಹೌಸ್ ಕೀಪಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ. ಆತ ಇತ್ತೀಚೆಗೆ ಕೆಲಸ ಬಿಟ್ಟಿದ್ದ.