ನರೇಂದ್ರ ಲಾಲ್ ಚೌಧರಿ, ಗಜೇಂದ್ರ ಮತ್ತು ಅರುಣ್ ಕುಮಾರ್ ವಿಮೆ ಹಣದ ಆಸೆಗಾಗಿ ಅಂಗಡಿಗೆ ಬೆಂಕಿ ಇಡುವ ಸಂಚು ರೂಪಿಸಿದ್ದರು. ಅದರಂತೆ ಅಂಗಡಿಗೆ ಬೆಂಕಿ ಇಟ್ಟ ಬಳಿಕ ಗಜೇಂದ್ರ ಅವರು ಹೊರಬರಲಾರದೆ ಅಲ್ಲೇ ಸಜೀವವಾಗಿ ದಹನವಾಗಿದ್ದರು. ಈ ಅಗ್ನಿ ದುರಂತದಲ್ಲಿ ಗಜೇಂದ್ರ ಜೊತೆ ಬಂದಿದ್ದ ಅರುಣ್ ಕುಮಾರ್ ಅವರು ಗಾಯಗೊಂಡಿದ್ದಾರೆ. ಕಟ್ಟಡ ಗೋಡಾನ್ನಲ್ಲಿ ಶಾರ್ಟ್ ಸರ್ಕಿಟ್ ಆಗುವಂತೆ ಮಾಡಿ ಬೆಂಕಿ ಹೊತ್ತಿಸಲಾಗಿತ್ತು. ಆದ್ದರಿಂದ, ಎಲೆಕ್ಟ್ರಿಕಲ್ ಮಾಲೀಕನನ್ನು ಬಂಧಿಸಲಾಗಿದೆ.