ತುಮಕೂರಿನ 25 ವರ್ಷದ 4 ತಿಂಗಳ ಗರ್ಭಿಣಿ ರಾಧಾಮಣಿಗೆ ನರ್ಸ್ ಮಂಜುಳಾ ಎಂಬಾಕೆ ಗರ್ಭಪಾತ ಮಾಡಿಸಿದ್ದಳು, ಮೊದಲು ಗರ್ಭಪಾತವಾಗುವ ಮಾತ್ರೆ ನೀಡಿ ನಂತರ ಆಕೆಗೆ ಅಬಾರ್ಷನ್ ಮಾಡಿದ್ದಳು. ಆದರೆ ತಪ್ಪು ಕ್ರಮದಲ್ಲಿ ಗರ್ಭಪಾತ ಮಾಡಿದ್ದರಿಂದ ರಾಧಾಮಣಿ ಸಾವನ್ನಪ್ಪಿದ್ದಾರೆ ಎಂದು ತನಿಖಾ ವರದಿ ಹೇಳಿದೆ. ನರ್ಸ್ ಮಂಜುಳಾ, ಇಬ್ಬರು ವೈದ್ಯರು, ರಾಧಾಮಣಿ ಪತಿ ಮತ್ತು ಆಕೆಯ ನಾದಿನಿ ರಾಧಾಮಣಿ ಸಾವಿಗೆ ಕಾರಣ ಎಂದು ಹೇಳಲಾಗಿದೆ,