ಏಪ್ರಿಲ್ ೮ ರಂದು ಶಿವಮೊಗ್ಗದ ನೌಕರರ ಭವನದಲ್ಲಿ ಬೆಳಗ್ಗೆ ೧೦ ಘಂಟೆಗೆ ಈ ಚಳುವಳಿಯನ್ನು ಚಂಪಾ ಉದ್ಘಾಟಿಸಲಿದ್ದಾರೆ. ಗಣೇಶ್ ದೇವಿ, ದೇವನೂರು ಮಹಾದೇವ, ರಾಜೇಂದ್ರ ಚೆನ್ನಿ, ಅಗ್ರಹಾರ ಕೃಷ್ಣಮೂರ್ತಿ, ರಹಮತ್ ತರೀಕೆರೆ, ಎಚ್ ಎಸ್ ರಾಘವೇಂದ್ರ ರಾವ್, ಕೆ ವಿ ನಾರಾಯಣ್ ಸೇರಿದಂತೆ ನೂರಾರು ಚಿಂತಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.