ವಿಶ್ವವಿದ್ಯಾಲಯದ ಕ್ಯಾಂಪಸ್ ವರ್ಗವಾಗುವುದರ ಕುರಿತು ಮಾತನಾಡಿದ ಉಪ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್, ಪ್ರಸ್ತುತ ಎಂಜಿನಿಯರಿಂಗ್ ವಿಭಾಗ ಮಾತ್ರ ರಾಮನಗರಕ್ಕೆ ವರ್ಗವಾಗುತ್ತದೆ. ಭೂಮಿ ವ್ಯಾಜ್ಯದಲ್ಲಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸರ್ಕಾರ ರಾಮನಗರದಲ್ಲಿ 216 ಎಕ್ರೆ ಪ್ರದೇಶವನ್ನು ನೀಡಿದೆ. ಅದರಲ್ಲಿ 145 ಎಕ್ರೆ ಹೆಲ್ತ್ ಸಿಟಿಗೆ ಮತ್ತು 71 ಎಕ್ರೆ ಆಡಳಿತ ವಿಭಾಗಕ್ಕೆ ಆಗಿದೆ. ಇವುಗಳಲ್ಲಿ 77 ಎಕ್ರೆ ಭೂಮಿ ವಿವಾದದಲ್ಲಿದೆ.