ಈ ವರ್ಷ ಎಸ್ಸಿ, ಎಸ್ಟಿ ಸಮುದಾಯಕ್ಕಾಗಿ ಇರುವ ಅಂಬೇಡ್ಕರ್ ಆವಾಸ್ ವಸತಿ ಯೋಜನೆ ಆರಂಭವಾಗಲಿದೆ. ಗ್ರಾಮೀಣ ಭಾಗದ ಬಡ ದಲಿತರಿಗೆ ಸೈಟು ಮತ್ತು 1.75 ಲಕ್ಷ ರೂಪಾಯಿ ಆರ್ಥಿಕ ನೆರವು, ನಗರ ಪ್ರದೇಶಗಳಲ್ಲಿರುವ ದಲಿತರಿಗೆ ಪಕ್ಕಾ ಮನೆ ಕಟ್ಟಲು 2 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಸರ್ಕಾರಿ ಭೂಮಿಯಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿರುವವರು ಉಚಿತ ವಸತಿಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು ಎಂದು ಆಂಜನೇಯ ತಿಳಿಸಿದರು.