ಮುಂದಿನ ವಾರದಿಂದ ಬೆಳ್ಳಂದೂರು ಕೆರೆ ಸ್ವಚ್ಛತಾ ಕಾಮಗಾರಿ ಪ್ರಾರಂಭವಾಗಲಿದ್ದು, ಬಿಡಿಎ ಕೆರೆಯಲ್ಲಿರುವ ಅವಶೇಷಗಳನ್ನು ಹಾಗೂ ತ್ಯಾಜ್ಯಗಳನ್ನು ತೆಗೆಸಲಿದೆ. ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ನಿಗಾ ವಹಿಸಲು ಸಿಸಿಟಿವಿಯನ್ನು ಅಳವಡಿಸಿ ಅದನ್ನು ನಿರ್ವಹಿಸುವ ಕೆಲಸ ಬಿಬಿಎಂಪಿಯ ಹೆಗಲೇರಿದೆ. ಇನ್ನು ಕೆಎಸ್ ಪಿಸಿಬಿ ಕೆರೆ ಬಳಿ ಇರುವ ಕೈಗಾರಿಕೆಗಳನ್ನು ಮುಚ್ಚಿಸಿ ಕೆರೆಯೊಳಗೆ ಕೈಗಾರಿಕೆಗಳ ತ್ಯಾಜ್ಯ ಹರಿಯದಂತೆ ನಿಗಾ ವಹಿಸುವ ಜವಾಬ್ದಾರಿ ಪಡೆದಿದೆ.