ಮೈಸೂರಿನಲ್ಲಿ ಹೆಚ್ಚಿರುವ ದಟ್ಟಣೆ ತಗ್ಗಿಸಲು ಹಲವು ಅವಕಾಶಗಳಿವೆ, ಅಶೋಕಪುರ ಮತ್ತು ಬೆಳಗೊಳದಲ್ಲಿ ಟರ್ಮಿನಲ್ ಯಾರ್ಡ್ ಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಲಾಗುತ್ತಿದೆ, ಆದರೆ ಈ ಪ್ರದೇಶಗಳಲ್ಲೂ ಕೂಡ ಸ್ವಾಧೀನ ಪಡಿಸಿಕೊಳ್ಳಲು ಯಾವುದೇ ಭೂಮಿ ಲಭ್ಯವಿಲ್ಲ. ಕಡಕೊಳದಲ್ಲಿ ಸ್ಯಾಟಲೈಟ್ ಟರ್ಮಿನಲ್ ಅಭಿವೃದ್ಧಿಗೊಳಿಸುವ ಪ್ರಸ್ತಾವನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.