ಈ ಬಾರಿಯ ರಾಬಿ ಬೆಳೆಗೆ ಜಲಾಶಯದಿಂದ ನೀರು ಹರಿಸಿದ ಕಾರಣದಿಂದಾಗಿ ನೀರಿನ ಕೊರತೆ ತಲೆದೋರಿದೆ. ಈ ಮೊದಲು ಕೇವಲ ಖಾರಿಫ್ ಬೆಳೆಗಳಿಗೆ ಮಾತ್ರ ಜಲಾಶಯದಿಂದ ನೀರು ಹರಿಸಲಾಗುತ್ತಿತ್ತು. ಉಳಿದ ನೀರನ್ನು ವಿಜಯ ಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಆದರೆ ಈ ಬಾರಿ ರೈತರ ಒತ್ತಾಯದಮ ಮೇರೆಗೆ ರಾಬಿ ಬೆಳೆಗೆ ನೀರು ಬಿಡಲಾಗಿತ್ತು. ಮೊದಲ ಬಾರಿಗೆ ರಾಬಿ ಬೆಳೆಗೆ ನೀರು ಹರಿಸಿದ ಪರಿಣಾಮ ಕುಡಿಯುವ ನೀರಿನ ಬವಣೆ ತಲೆ ದೋರಿದೆ.