ಉಡುಪಿ: ಮತ್ಸ್ಯಗಂಧ ರೈಲಿನಲ್ಲಿ ದಂಪತಿಗೆ ಮತ್ತುಬರಿಸಿ ದರೋಡೆ

ಕಾರ್ಕಳ ಮೂಲದ ವೃದ್ಧ ದಂಪತಿಗೆ ಮತ್ತು ಬರಿಸಿ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ಮತ್ಸ್ಯ ಗಂಧ ರೈಲಿನಲ್ಲಿ ...
ಸಂಜೀವ ಶೆಟ್ಟಿ ಮತ್ತು ರತ್ನ ಶೆಟ್ಟಿ
ಸಂಜೀವ ಶೆಟ್ಟಿ ಮತ್ತು ರತ್ನ ಶೆಟ್ಟಿ
Updated on
ಉಡುಪಿ: ಕಾರ್ಕಳ ಮೂಲದ ವೃದ್ಧ ದಂಪತಿಗೆ ಮತ್ತು ಬರಿಸಿ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ಮತ್ಸ್ಯ ಗಂಧ ರೈಲಿನಲ್ಲಿ ನಡೆದಿದೆ. 
ಭಾನುವಾರ ಬೆಳಗ್ಗೆ ಮತ್ಸ್ಯಗಂಧ ರೈಲಿನ ಸ್ಲೀಪರ್ ಕೋಚ್ ಸಂಜೀವ ಶೆಟ್ಟಿ ಮತ್ತು ರತ್ನ ಶೆಟ್ಟಿ ಎಂಬುವರನ್ನು ದರೋಡೆ ಮಾಡಲಾಗಿದೆ.
ಆಗಸ್ಟ್ 5ರ ಶನಿವಾರ 3.50ಕ್ಕೆ ಥಾಣೆಯಿಂದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. 
ರೈಲಿನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಸಂಜೀವ ಶೆಟ್ಟಿ ಮತ್ತು ರತ್ನಾ ದಂಪತಿಗೆ ಮತ್ತು ಬರಿಸಿ ಬಳಿಕ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಅದೇ ರೈಲಿನಲ್ಲಿ ಸಂಜೀವ ಶೆಟ್ಟಿ ಅವರ ಸಂಬಂಧಿಕರಾದ ಗಣೇಶ್ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ಕೂಡ ಬೇರೊಂದು ಕೋಟ್ ಲ್ಲಿದ್ದರು. ಬೆಳಗ್ಗೆ 10.30ಕ್ಕೆ  ರೈಲು ಉಡುಪಿಗೆ ಆಗಮಿಸಿತು, ಈ ವೇಳೆ ದಂಪತಿ ದೀರ್ಘ ನಿದ್ರೆಯಲ್ಲಿದ್ದರು, ಸಂಬಂಧಿಕರು ಎಬ್ಬಿಸಲು ಬಂದಾಗ ಅನುಮಾನ ಗೊಂಡು ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ, ಸುಮಾರು 4 ಲಕ್ಷ ರು. ಮೌಲ್ಯದ ಹಣ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com