ಆರ್ ಟಿಇಯಡಿ ದಾಖಲಾದ ಬಾಲಕನಿಗೆ ತರಗತಿ ಪ್ರವೇಶಕ್ಕೆ ನಿರಾಕರಣೆ: ಪೋಷಕರ ದೂರು

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳುಗಳು ಕಳೆದ ನಂತರವೂ ಶಿಕ್ಷಣ ಹಕ್ಕು ಕಾಯ್ದೆಯಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳುಗಳು ಕಳೆದ ನಂತರವೂ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಲೇ ಇದೆ.
ಇತ್ತೀಚಿನ ಘಟನೆಯೊಂದರಲ್ಲಿ ಬೆಂಗಳೂರಿನ ಮಲ್ಲೇಶ್ವರದ ದೇವಯ್ಯ ಪಾರ್ಕ್ ಹತ್ತಿರ ಪವನ್ ಇಂಗ್ಲಿಷ್ ಶಾಲೆ ಎಂಬ ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿರುವ ಆರ್ ಟಿಇಯಡಿ ದಾಖಲಾದ ವಿದ್ಯಾರ್ಥಿಗೆ ಕಳೆದ 10 ದಿನಗಳಿಂದ ತರಗತಿಗೆ ಹಾಜರಾಗಲು ಬಿಡುತ್ತಿಲ್ಲ ಎಂದು ಪೋಷಕರಿಂದ ದೂರು ಬಂದಿದೆ. 
ಬಾಲಕನ ಪೋಷಕರು ಆರ್ ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಮೊರೆ ಹೋದರು. ಸಂಘ ದೂರನ್ನು ಬ್ಲಾಕ್ ಶಿಕ್ಷಣ ಅಧಿಕಾರಿಗೆ ವರ್ಗಾಯಿಸಿತು. ಪೋಷಕರು ನೀಡಿರುವ ದೂರಿನ ಪ್ರಕಾರ, ಶಾಲಾಧಿಕಾರಿಗಳು ಬಾಲಕನನ್ನು ತರಗತಿಗೆ ಹೋಗಲು ಬಿಡುತ್ತಿಲ್ಲ. ಶಾಲೆಯ ವ್ಯವಸ್ಥಾಪಕ ಮಂಡಳಿ ಇಟ್ಟ ಬೇಡಿಕೆಯಂತೆ ಶಾಲಾ ಶುಲ್ಕವನ್ನು ಕಟ್ಟಲು ಪೋಷಕರು ನಿರಾಕರಿಸಿರುವುದು ಕಾರಣ ಎನ್ನಲಾಗಿದೆ.
ಶಿಕ್ಷಣ ಹಕ್ಕು ಕಾಯ್ದೆಯಡಿ ತಮ್ಮ ಮಗ ಕಳೆದ 6 ವರ್ಷಗಳಿಂದ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಪ್ರತಿ ವರ್ಷ ನಾವು ಶಾಲೆಯ ಇತರ ಚಟುವಟಿಕೆಗಳಿಗೆಂದು 7,000 ರೂಪಾಯಿ ಕಟ್ಟಬೇಕು. ಈ ವರ್ಷ ಇನ್ನೂ ಹಣವನ್ನು ಕಟ್ಟಿಲ್ಲ. ಇದಕ್ಕಾಗಿ ಶಾಲೆಯ ಮುಖ್ಯಸ್ಥರು ನಮ್ಮ ಮಗನನ್ನು ಗುರಿಯಾಗಿಟ್ಟುಕೊಂಡು ಕಿರುಕುಳ ನೀಡುತ್ತಿದ್ದಾರೆ ಎನ್ನುತ್ತಾರೆ ಬಾಲಕನ ತಂದೆ ಸುಭಾಷ್ ಚಂದ್ರ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಮತ್ತು ಮ್ಯಾನೇಜರ್ ನ್ನು ಸಂಪರ್ಕಿಸಿದರೆ ಶುಲ್ಕ ಪಾವತಿಸದೆ ಶಾಲೆಯ ಆವರಣದೊಳಗೆ ಪ್ರವೇಶಿಸುವುದು ಬೇಡ ಎಂದು ಹೇಳಿದ್ದಾರೆ ಎಂದರು.
ಇತ್ತೀಚೆಗೆ ಶಾಲೆಯಲ್ಲಿ ಸ್ಥಾಪನಾ ದಿನ ಆಚರಿಸಲಾಗಿತ್ತು. ಅದಕ್ಕೆ ಅವರ ಮಗ ಭಾಗವಹಿಸಿರಲಿಲ್ಲವಂತೆ. ನಮ್ಮ ಮನೆ ಶಾಲೆಯ ಹತ್ತಿರದಲ್ಲೆ ಇರುವುದು. ಆತನ ತನ್ನ ಸ್ನೇಹಿತನನ್ನು ಭೇಟಿ ಮಾಡಲೆಂದು ಹೋದಾಗ  ಶಾಲೆಯ ಅಧಿಕಾರಿಗಳು ಅವನನ್ನು ನೋಡಿ ಕರೆದು ಕೋಣೆಯೊಳಗೆ ಕೂಡಿ ಹಾಕಿದರು. ಶಿಕ್ಷಕಿಯನ್ನು ಹೊಡೆಯಲು ಹೋಗಿದ್ದಕ್ಕೆ ನಿಮ್ಮ ಮಗನನ್ನು ಕೂಡಿ ಹಾಕಿದೆವು ಎಂದು ಇದೀಗ ಅವರು ಹೇಳುತ್ತಾರೆ ಎಂದು ಪೋಷಕರು ಆರೋಪಿಸುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪವನ್ ಇಂಗ್ಲಿಷ್ ಶಾಲೆಯ ಸ್ಥಾಪಕಿ ಮತ್ತು ಪ್ರಾಂಶುಪಾಲೆ ಡಾ.ಪ್ರಭಾ ಶ್ರೀಧರ್, ಶಾಲೆಗೆ ಬರಬೇಡ ಎಂದು ಬಾಲಕನಿಗೆ ಹೇಳಿದ್ದೇವೆ. ಆದರೆ ಅದು ಶುಲ್ಕ ನೀಡದಿರುವುದಕ್ಕೆ ಅಲ್ಲ. ಆತ ಕ್ರೂರವಾಗಿ ಶಾಲೆಯಲ್ಲಿ ವರ್ತಿಸುತ್ತಾನೆ. ಕಬ್ಬಿಣದ ಸಲಾಕೆಯನ್ನು ಹಿಡಿದುಕೊಂಡು ಶಾಲೆಗೆ ಬರುತ್ತಾನೆ. ಶಾಲೆಯ ಕಟ್ಟಡದ ಮೇಲೆ ಕಲ್ಲು ಹೊಡೆಯುತ್ತಾನೆ. ಶಿಕ್ಷಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ಅದಕ್ಕೆ ಅವನ ಪೋಷಕರನ್ನು ಕರೆದು ಶಾಲೆಗೆ ಕಳುಹಿಸುವುದಾದರೆ ನಿಮ್ಮ ರಿಸ್ಕ್ ಲ್ಲಿ ಕಳುಹಿಸಿ ಎಂದು ಹೇಳಿದ್ದೇವೆ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com