ವಿದ್ಯಾ ವೀರ್ತ ಅಭಿಯಾನದ ಅಧ್ಯಕ್ಷ ತರುಣ್ ವಿಜಯ್ ಮಾತನಾಡಿ, ಕರ್ನಾಟಕ ರಾಜ್ಯ ಈ ವಿಷಯದಲ್ಲಿ ಮುಂದಾಳತ್ವ ವಹಿಸಲಿ, ಹನುಮಂತಪ್ಪ ಕೊಪ್ಪದ, ಸಂದೀಪ್ ಉನ್ನಿಕೃಷ್ಣನ್ ರಂತಹ ಹೀರೋಗಳ ಭಾವಚಿತ್ರಗಳನ್ನು ವಿಶ್ವವಿದ್ಯಾಲಯದ ಗೋಡೆಗಳಲ್ಲಿ ಹಾಕುವ ಮೂಲಕ ಇಂದಿನ ಯುವ ಜನಾಂಗಕ್ಕೆ ಅವರನ್ನು ಸ್ಪೂರ್ತಿ ಮಾಡಬೇಕೆಂದು ಹೇಳಿದರು.