ಪಂಚಾಗದ ಪ್ರಕಾರ ಕೃಷ್ಣ ಜನ್ಮಾಷ್ಟಮಿ ಆಗಬೇಕಾದ್ರೆ ಸಿಂಹ ಮಾಸದ-ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯಂದು ಚಂದ್ರೋದಯವಾಗುವ ಕಾಲ ಬರಬೇಕು. ಆ ಗಳಿಗೆಯಲ್ಲಿ ಶ್ರೀ ಕೃಷ್ಣ ಜನಿಸಿದ್ದು, ಹೀಗಾಗಿ ಈ ಘಳಿಗೆ ಮುಂದಿನ ತಿಂಗಳು ಅಂದರೆ ಸೆಪ್ಟಂಬರ್ ನಲ್ಲಿ ಇರುವುದರಿಂದ ಉಡುಪಿಯಲ್ಲಿ ಸೆಪ್ಟಂಬರ್ 13 ಮತ್ತು 14 ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ ಎಂದು ಹಿರಿಯ ಪಂಡಿತ ಪ್ರೊ. ಗೋಪಾಲಾಚಾರ್ಯ ಹೇಳಿದ್ದಾರೆ.