ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಕಾರಣ ನಮ್ಮತಂದೆಯನ್ನು ಇಲ್ಲಿ ದಾಖಲಿಸಿದ್ದೇವೆ, ಕಳೆದ ವರ್ಷ ನಾನು ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದೆ, ಇದಕ್ಕಾಗಿ ಗೌರವಧನವಾಗಿ 11 ಸಾವಿರ ರೂ ನೀಡಿದ್ದರು. ಕಾಲೇಜಿನಲ್ಲಿ ನಮ್ಮನ್ನು ಖಾಯಂ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿಲ್ಲ, ಹಿಗಾಗಿ ನನಗೆ ಯಾವುದೇ ಕೆಲಸವಿಲ್ಲ, ನನ್ನ ಇಡೀ ಸಂಸಾರ ನನ್ನ ತಂದೆಯ ಪಿಂಚಣಿ ಮೇಲೆ ನಡೆಯುತ್ತಿದೆ ಎಂದು ಹೇಳಿದ್ದಾರೆ.