ಗೂಡ್ಸ್ ಆಟೋದಲ್ಲಿ 15 ಮಂದಿಯನ್ನು ಕೂರಿಸಿಕೊಂಡು ಕರೆದೊಯ್ಯಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಆಟೋ ಕಬಿನಿ ಕಾಲುವೆಗೆ ಉರುಳಿಬಿದ್ದಿದೆ. ಪುಟ್ಟಿ(13). ಮಹದೇವ ಪ್ರಸಾದ್ (5) ಹಾಗೂ ಮತ್ತೊಬ್ಬ ಐದು ವರ್ಷದ ಬಾಲಕ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಚಾಮರಾಜನಗರದವರಾದ ಇವರೆಲ್ಲರು, ಟಿ. ನರಸಿಪುರದಲ್ಲಿರುವ ಕನ್ನಮ್ಮ ದೇವಿ ದೇವಾಲಯಕ್ಕೆ ತೆರಳುತ್ತಿದ್ದರು.