ಲಿಂಗಾಯತ ಸಮಾಜ ಒಡೆದಿದ್ದು ಯಡಿಯೂರಪ್ಪ: ನಟ ಚೇತನ್ ಹೇಳಿಕೆಯಿಂದ ವಿವಾದ ಸೃಷ್ಟಿ

ಬಿ.ಎಸ್‌. ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಮಠಗಳಿಗೆ ಹಣ ನೀಡಿದರು. ಈಗ ಮುಖ್ಯಮಂತ್ರಿ ಸಿದ್ದರಾಂಯ್ಯ ಅದನ್ನೇ ಮಾಡುತ್ತಿದ್ದಾರೆ.
ನಟ ಚೇತನ್
ನಟ ಚೇತನ್
Updated on
ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಮಠಗಳಿಗೆ ಹಣ ನೀಡಿದರು. ಈಗ ಮುಖ್ಯಮಂತ್ರಿ ಸಿದ್ದರಾಂಯ್ಯ ಅದನ್ನೇ ಮಾಡುತ್ತಿದ್ದಾರೆ. ಜೆಡಿಎಸ್‌ ಕೂಡ ಮಠಗಳಿಗೆ ಹಣ ನೀಡುತ್ತಿದೆ. ಹೀಗೆ ಮಠಗಳಿಗೆ ಹಣ ನೀಡುವುದು ತಪ್ಪು. ಸರಕಾರಗಳು ಲಿಂಗಾಯತ ಧರ್ಮದ ಬೋಧನೆಯನ್ನು ಒಪ್ಪಿಕೊಂಡು ಕಾಯಕಕ್ಕೆ ಒತ್ತು ನೀಡುವತ್ತ ಕ್ರಮ ಕೈಗೊಳ್ಳಬೇಕು ಎಂದು ನಟ ಚೇತನ್‌ ಹೇಳಿದರು.
ನಗರದ ಬಸವಭವನದಲ್ಲಿ ನಡೆದ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ ಕುರಿತ  ಸಭೆಯಲ್ಲಿ ಅವರು ಮಾತನಾಡಿದರು. ಲಿಂಗಾಯತ ಧರ್ಮವನ್ನು ಒಡೆದಿದ್ದೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಸುತ್ತೂರು ಮಠದವರು ಎಂದು ನಟ ಚೇತನ್ ವೇದಿಕೆಯಲ್ಲಿಯೇ ಮಾತನಾಡುತ್ತ ನೇರವಾಗಿ ಆರೋಪಿಸಿದ ಚೇತನ್ ಭಾವೋದ್ರೇಕದಿಂದ ಮಾತನಾಡಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ರಾಜಕೀಯ ಲಾಭಗಳಿಗಾಗಿ ಲಿಂಗಾಯತ ಸಮುದಾಯವನ್ನು ಒಡೆದರು. ಅವರ ಈ ಕಾರ್ಯಕ್ಕೆ ಸುತ್ತೂರು ಮಠದ ಸ್ವಾಮೀಜಿ ಸೇರಿದಂತೆ ಕೆಲವಾರು ಮಠಾಧಿಪತಿಗಳೂ ಕೈಜೋಡಿಸಿದ್ದರು ಎಂದು ಕಿಡಿಕಾರಿದರು.
ಬಿಎಸ್ ವೈ ಬೆಂಬಲಿಗರ ಆಕ್ರೋಶ:  ಚೇತನ್‌ ಹೀಗೆ ಹೇಳಿದ್ದು ಸಭೆಯಲ್ಲಿದ್ದ ಬಿಎಸ್ ವೈ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಸಭೆಯಲ್ಲಿ ಗದ್ದಲ, ವಿರೋಧ ವ್ಯಕ್ತವಾಯಿತು. ಕೊನೆಗೆ ಸಂಘಟಕರು ಯಾರ ಹೆಸರು ಉಲ್ಲೇಖಿಸದೆ ಮಾತನಾಡಿ ಎಂದು ಚೇತನ್‌ ಮನವೊಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com