ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಚಾಲಕ ಜಮಾಲುದ್ದೀನ್, ಪೊಲೀಸ್ ಠಾಣೆ 100 ಮೀಟರ್ ದೂರದಲ್ಲಿತ್ತು. ಆದರೂ ಒಬ್ಬ ಪ್ರಯಾಣಿಕ ಬಂದಿಲ್ಲದ ಕಾರಣ ಆತನ ಸಹ ಪ್ರಯಾಣಿಕ ನಿಲ್ಲುವಂತೆ ಹೇಳಿದರು. ಹೀಗಾಗಿ ನನಗೆ ಬಸ್ಸು ನಿಲ್ಲಿಸಬೇಕಾಯಿತು. ಆಗ ದರೋಡೆಕೋರರು ಹೊರಗೆ ಹಾರಿದರು. ನಂತರ ದರೋಡೆಕೋರರು ತಮ್ಮ ಬೈಕ್ ನಲ್ಲಿ ಪರಾರಿಯಾದರು ಎಂದು ವಿವರಿಸಿದರು.