"ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಬಾವಿಕಟ್ಟೆ ನಾಗಣ್ಣ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿಶಂಕರ್ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಬಿಟಿವಿ ನ್ಯೂಸ್ ವರದಿಗಾರ ವಾಗೀಶ್ ತುಮಕೂರಿನ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. "ಬಿ.ಜಿ.ಜ್ಯೋತಿಗಣೇಶ್ ಅವರ ಪತ್ರಿಕಾಗೋಷ್ಠಿ ಗೆ ತೆರಳಿದ್ದ ನನ್ನ ಮೇಲೆ ಹಲ್ಲೆ ನಡೆದಿದೆ. 'ಇಲ್ಲ ಸಲ್ಲದ ವರದಿ ಪ್ರಸಾರ ಮಾಡುತ್ತೀಯೆ' ಎಂದು ನಾಗಣ್ಣ ಹಾಗೂ ರವಿಶಂಕರ್ ನನಗೆ ಹೆದರಿಸಿ, ಜೀವಬೆದರಿಕೆ ಹಾಕಿದ್ದಾರೆ" ಎಂದು ವಾಗೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.