ಪಶ್ಚಿಮ ಪ್ರಾಂತ ಡಿಐಜಿ ಹೇಮಂತ್ ಮಿಂಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ," ಆ ಅಹಿತಕರ ಘಟನೆ ನಡೆಯುವ ಮೊದಲು, ಎಲ್ಲರೂ ಶಾಂತಿಯುತವಾಗಿ ಸಾಗುತ್ತಿತ್ತು "ಎಂದರು. ಭದ್ರತಾ ವ್ಯವಸ್ಥೆ ಕುರಿತಂತೆ ಅವರು ಮಾತನಾಡಲು ನಿರಾಕರಿಸಿದರು. "11,500 ಭಕ್ತರು ಅಂದು ಮಧ್ಯಾಹ್ನ ಪೀಠಕ್ಕೆ ಭೇಟಿ ನೀಡಿದ್ದರು. ಮುಜರಾಯಿ ಇಲಾಖೆಯು 30,ಸಾವಿರ ಜನರಿಗೆ ಪ್ರಸಾದ ವಿತರಣೆ ನಡೆಸಿತು" ಎಂದು ಉಪ ಕಮೀಷನರ್ ಎಂ.ಕೆ.ಶ್ರೀರಂಗಯ್ಯ ಹೇಳಿದ್ದಾರೆ.