ಗಣೇಶ್ ಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದ ಮೌಲ್ವಿ ತಲೆಗೆ ಹತ್ತು ಲಕ್ಷ: ಬಿಜೆಪಿ ಘೋಷಣೆ

ಮುಸ್ಲಿಂ ಮೌಲ್ವಿ ಮೆಹಮೂದ್ ಖೈರಾತಿ ಅವರ ತಲೆ ತಂದವರಿಗೆ ಹತ್ತು ಲಕ್ಷ ರೂ. ನೀಡುವುದಾಗಿ ಬಿಜೆಪಿ ಘೋಷಿಸಿದೆ.
ಮೌಲ್ವಿ ಮೆಹಮೂದ್ ಖೈರಾತಿ
ಮೌಲ್ವಿ ಮೆಹಮೂದ್ ಖೈರಾತಿ
Updated on
ಬಾಗಲಕೋಟೆ: ಮುಸ್ಲಿಂ ಮೌಲ್ವಿ ಮೆಹಮೂದ್ ಖೈರಾತಿ ಅವರ ತಲೆ ತಂದವರಿಗೆ ಹತ್ತು ಲಕ್ಷ ರೂ. ನೀಡುವುದಾಗಿ ಬಿಜೆಪಿ ಘೋಷಿಸಿದೆ.
ಹುಬ್ಬಳ್ಳಿಯ ಗಣೇಅ ಪೇಟೆಯನ್ನು ಪಾಕಿಸಾನಕ್ಕೆ ಹೋಲಿಸಿದ್ದ ಮೌಲ್ವಿಯ ತಲೆ ತಂದರೆ ಹತ್ತು ಲಕ್ಷ ರೂ ನೀಡುವುದಾಗಿ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರ ಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ ಹೇಳಿದ್ದಾರೆ. ಹುಣಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಬಂಧನವನ್ನು ಖಂಡಿಸಿ ಬಾಗಲಕೋಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
"ಹುಬ್ಬಳ್ಳಿಯನ್ನು ಪಾಕಿಸ್ತಾನಕ್ಕೆ ಹೋಲಿಸಿದ ಮೌಲ್ವಿ ಅವರಿಗೆ ಈ ದೇಶದಲ್ಲಿರಲು ಅರ್ಹತೆ ಇಲ್ಲ. ಇಂತಹ ಮೌಲ್ವಿಯವರ ತಲೆ ಕಡಿದು ತಂದವರಿಗೆ ಬಿಜೆಪಿ ಯುವ ಮೋರ್ಚಾದಿಂದ ಹತ್ತು ಲಕ್ಷ ಇನಾಮು ನೀಡಲಾಗುವುದು" ಎಂದು ಅವರು ಘೋಷಿಸಿದ್ದಾರೆ.
ಇದೇ ಈದ್ ಮಿಲಾದ್ ಸಮಯದಲ್ಲಿ ಮೌಲ್ವಿ ಮಜೀದ ಮುತವಲಿ ಅಬ್ದುಲ್ ಹಮೀದ್ ಖೈರಾತಿ ಅವರು," ಗಣೇಶ್ ಪೇಟೆ ನನಗೆ ಪಾಕಿಸ್ತಾನ ಹಾಗೆಯೇ ಕಾಣುತ್ತಿದೆ, ಪಾಕಿಸ್ತಾನಕ್ಕೆ ಹೋಗಿ ನೋಡುವ ಅವಶ್ಯಕತೆ ಇಲ್ಲ. ಇಲ್ಲಿಯೇ ಪಾಕಿಸ್ತಾನ ರೂಪು ತಾಳಿದೆ. ನಾವು ಒಗ್ಗಟ್ಟಿನಿಂದ ಇದ್ದಲ್ಲಿ ನಮ್ಮ ತಂಟೆಗೆ ಯಾರೂ ಬರಲಾರರು" ಎಂದು ಹೇಳಿಕೆ ನೀಡಿದ್ದರು. ಮೌಲ್ವಿ ಅವರ ಈ ಹೇಳಿಕೆಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com