ವಿಜಯಪುರ ಜಿಲ್ಲೆ ಹೊಸ ತಾಲ್ಲೂಕುಗಳ ರಚನೆಯಿಂದ ಹೆಚ್ಚಿನ ಲಾಭ ಪಡೆದುಕೊಳ್ಳಲಿದೆ. ಇಲ್ಲಿ ಬಬಲೇಶ್ವರ, ನಿಡಗುಂಡಿ, ಟಿಕೊಟಾ, ದೇವರಹಿಪ್ಪರಗಿ, ತಾಳಿಕೋಟ, ಚಡಚಾನ ಮತ್ತು ಕೊಲ್ಹರ ಎಂಬ ಏಳು ಹೊಸ ತಾಲ್ಲೂಕುಗಳು ರಚನೆಯಾಗಲಿವೆ. ಬೆಂಗಳೂರು ನಗರದಲ್ಲಿ ಯಲಹಂಕ ಹೊಸ ತಾಲ್ಲೂಕಾಗಿ ಪರಿವರ್ತನೆಯಾಗಲಿದೆ. ಹೊಸ ವರ್ಷಕ್ಕೆ ರಾಜ್ಯದ 1000 ಸಣ್ಣ ಹಳ್ಳಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುತ್ತದೆ.ಬಗರ್ ಹುಕುಂ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರವನ್ನು ಫೆಬ್ರವರಿ ತಿಂಗಳಿನಿಂದ ವಿತರಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.