ಫೆಡರೇಶನ್ ಆಫ್ ಇಂಡಿಯನ್ ರ್ಯಾಷನಲಿಸ್ಟ್ ಅಸೋಸಿಯೇಶನ್ಸ್ (ಎಫ್ ಐಆರ್ ಎ) ನ ಅಧ್ಯಕ್ಷರಾದ ಪ್ರೊಫೆಸರ್ ನಾಯಕ್ ಅವರು ನಿತ್ಯಾನಂದ ಅಥವಾ ಆತನ ಶಿಷ್ಯರು ಈ ಪರೀಕ್ಷೆಗಳಲ್ಲಿ 90 ಶೇಕಡಾ ಫಲಿತಾಂಶ ನೀಡಿದರೆ ತಾನು 5 ಲಕ್ಷ ರೂ. ನೀಡಲು ಸಿದ್ದನಿದ್ದೇನೆ ಎಂದಿದ್ದಾರೆ. ಈ ಸವಾಲು ಹಾಕಿರುವ ನಾಯಕ್ ಅವರಿಗೆ ಇದುವರೆಗೆ ಸಾಕಷ್ಟು ಬೆದರಿಕೆ ಕರೆಗಳೂ ಬರುತ್ತಿವೆ. ನಿತ್ಯಾನಂದರ ಶಿಷ್ಯೆ ಮಹಾಯೋಗಿನಿ ನಿತ್ಯ ಮಹಾಯೋಗಾನಂದ ಅವರು ಇದಕ್ಕೆ ಪ್ರತಿಯಾಗಿ ನಿತ್ಯಾನಂದರ ಶಿಷ್ಯೆ ಮಹಾಯೋಗಿನಿ ನಿತ್ಯ ಮಹಾಯೋಗಾನಂದ ಅವರು ಇದಕ್ಕೆ ಪ್ರತಿಯಾಗಿ ಪ್ರೊ. ನಾಯಕ್ ಅವರನ್ನು ಅವರ ಫೇಸ್ ಬುಕ್ ಪೇಜ್ ನಲ್ಲಿ ಶಪಿಸಿದ್ದಾರೆ. ಶಾಪದೊಂದಿಗೆ, ಮಹಾಯೋಗಿನಿ ತನ್ನ ಫೇಸ್ ಬುಕ್ ವಾಲ್ ನಲ್ಲಿ ಹೀಗೆ ಬರೆದಿದ್ದಾರೆ: "ಚಿಕಿತ್ಸೆಗಾಗಿ, ದಯಮಾಡಿ ಸ್ವಾಮಿಯ ಬಳಿಗೆ ಬನ್ನಿ, ಅದೊಂದೇ ಈ ಸಮಸ್ಯೆಗೆ ಪರಿಹಾರವಾಗಿದೆ. ನಮ್ಮ ಆಶ್ರಮವು ಬೆಂಗಳೂರಿನ ಬಿಡದಿಯಲ್ಲಿದೆ. ನಿಮಗೆ ಮಾರ್ಗದರ್ಶ್ನ ನೀಡಲು ಹೆದ್ದಾರಿಗಳಲ್ಲಿ ಸಾಕಷ್ಟು ಫಲಕಗಳಿವೆ.ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬಂದು ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ"