ನಿತ್ಯಾನಂದನ ಶಿಷ್ಯರಿಂದ ವಿಚಾರವಾದಿ ನರೇಂದ್ರ ನಾಯಕ್ ಗೆ ಶಾಪ

ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ನಿತ್ಯಾನಂದನ ಅದ್ಭುತ ಶಕ್ತಿಯನ್ನು ಒಂದು ಪರಸ್ಪರ ಒಪ್ಪಿಗೆಯ ಸ್ಥಳದಲ್ಲಿ ಸಾಬೀತು ಪಡಿಸುವಂತೆ ಸವಾಲ ಖಾಕಿದ್ದಾರೆ.
ನರೇಂದ್ರ ನಾಯಕ್
ನರೇಂದ್ರ ನಾಯಕ್
ಮಂಗಳೂರು: ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ನಿತ್ಯಾನಂದನ ಅದ್ಭುತ ಶಕ್ತಿಯನ್ನು ಒಂದು ಪರಸ್ಪರ ಒಪ್ಪಿಗೆಯ ಸ್ಥಳದಲ್ಲಿ  ಸಾಬೀತು ಪಡಿಸುವಂತೆ ಸವಾಲ ಖಾಕಿದ್ದಾರೆ.
ಫೆಡರೇಶನ್ ಆಫ್ ಇಂಡಿಯನ್ ರ್ಯಾಷನಲಿಸ್ಟ್ ಅಸೋಸಿಯೇಶನ್ಸ್ (ಎಫ್ ಐಆರ್ ಎ) ನ ಅಧ್ಯಕ್ಷರಾದ ಪ್ರೊಫೆಸರ್ ನಾಯಕ್ ಅವರು ನಿತ್ಯಾನಂದ ಅಥವಾ ಆತನ ಶಿಷ್ಯರು ಈ ಪರೀಕ್ಷೆಗಳಲ್ಲಿ 90 ಶೇಕಡಾ ಫಲಿತಾಂಶ ನೀಡಿದರೆ ತಾನು  5 ಲಕ್ಷ ರೂ. ನೀಡಲು ಸಿದ್ದನಿದ್ದೇನೆ ಎಂದಿದ್ದಾರೆ. ಈ ಸವಾಲು ಹಾಕಿರುವ ನಾಯಕ್ ಅವರಿಗೆ ಇದುವರೆಗೆ ಸಾಕಷ್ಟು ಬೆದರಿಕೆ ಕರೆಗಳೂ ಬರುತ್ತಿವೆ. ನಿತ್ಯಾನಂದರ ಶಿಷ್ಯೆ ಮಹಾಯೋಗಿನಿ ನಿತ್ಯ ಮಹಾಯೋಗಾನಂದ ಅವರು ಇದಕ್ಕೆ ಪ್ರತಿಯಾಗಿ  ನಿತ್ಯಾನಂದರ ಶಿಷ್ಯೆ ಮಹಾಯೋಗಿನಿ ನಿತ್ಯ ಮಹಾಯೋಗಾನಂದ ಅವರು ಇದಕ್ಕೆ ಪ್ರತಿಯಾಗಿ ಪ್ರೊ. ನಾಯಕ್ ಅವರನ್ನು ಅವರ ಫೇಸ್ ಬುಕ್ ಪೇಜ್ ನಲ್ಲಿ ಶಪಿಸಿದ್ದಾರೆ. ಶಾಪದೊಂದಿಗೆ, ಮಹಾಯೋಗಿನಿ ತನ್ನ ಫೇಸ್ ಬುಕ್ ವಾಲ್ ನಲ್ಲಿ ಹೀಗೆ ಬರೆದಿದ್ದಾರೆ: "ಚಿಕಿತ್ಸೆಗಾಗಿ, ದಯಮಾಡಿ ಸ್ವಾಮಿಯ ಬಳಿಗೆ ಬನ್ನಿ, ಅದೊಂದೇ ಈ ಸಮಸ್ಯೆಗೆ ಪರಿಹಾರವಾಗಿದೆ. ನಮ್ಮ ಆಶ್ರಮವು ಬೆಂಗಳೂರಿನ ಬಿಡದಿಯಲ್ಲಿದೆ. ನಿಮಗೆ ಮಾರ್ಗದರ್ಶ್ನ ನೀಡಲು ಹೆದ್ದಾರಿಗಳಲ್ಲಿ ಸಾಕಷ್ಟು ಫಲಕಗಳಿವೆ.ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬಂದು ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ"
ನವೆಂಬರ್ 26 ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಮಹಾಯೋಗಿನಿ ಅವರು ಶಾಪವನ್ನು ನೀಡಿದ್ದಾರೆ. ಗುರುವನ್ನು ನಿಂದಿಸುವವರು ಅವರ ಮೂರನೇ ಕಣ್ಣಿನ ಬಿಸಿಗೆ ತುತ್ತಾಗಬೇಕು, ಅವರ ಮೆದುಳಿನಲ್ಲಿ ಗೆಡ್ಡೆ ಬೆಳೆಯುತ್ತದೆ. ಸ್ವಾಮೀಜಿಯಲ್ಲಿ ವಿಶ್ವಾಸವಿಡದ ಅವರ ಪೋಸ್ಟ್ ಗಳಿಗೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡದವರಿಗೆ ನೀಡಿದ 'ಉಡುಗೊರೆ'ಗಳೊಂದಿಗೆ ಮಹಾಯೋಗಿನಿ ಎಚ್ಚರಿಕೆ ಸಂದೇಶವು ಪೋಸ್ಟ್ ನಲ್ಲಿದೆ.
ಪ್ರೊಫೆಸರ್ ನಾಯಕ್, ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದು ಮಹಾಯೋಗಿನಿ ಅವರ ಫೇಸ್ ಬುಕ್ ಸಂದೇಶದ ವಿರುದ್ಧ ಬೆದರಿಕೆ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಹೇಳಿದ್ದಾರೆ. "ನಿತ್ಯಾನಂದ ಮತ್ತು ಅವರ ಶಿಷ್ಯರು ಜನರಿಗೆ ರೋಗ ಮತ್ತು ಬೆದರಿಕೆಗಳನ್ನು ಹಾಕುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಈ ಸಂಬಂಧ  ಡಿಜಿ ಮತ್ತು ಐಜಿಪಿಗೆ ದೂರು ಸಲ್ಲಿಸುವ ಮೂಲಕ ನಾನು ಇದನ್ನೆಲ್ಲಾ ಅಂತ್ಯಗೊಳಿಸಲು ನಿರ್ಧರಿಸಿದೆ " ಎಂದ ಅವರು ಇನ್ನೂ ಉನ್ನತ ಅಧಿಕಾರಿಗಳಿಂದ ಈ ಕುರಿತ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com