ಬೆಂಗಳೂರಿನ ಜೆಪಿ ನಗರದಲ್ಲಿ ಈ ದುರ್ಘಟನೆ ನಡೆದಿದ್ದು ರಿತೇಶ್ ಕುಮಾರ್ (35) ಆತ್ಮಹತ್ಯೆಗೆ ಶರಣಾದ ನತದೃಷ್ಟ ವ್ಯಕ್ತಿ. ಏಳು ವರ್ಷದ ಮಗುವಿಗೆ ಪ್ರಸಿದ್ದ ಶಾಲೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಟ್ಯ್ಟೋರಿಯಲ್ ಮಾಲೀಕ ಆದಿತ್ಯ ಬಜಾಜ್, ರಿತೇಶ್ ರಿಂದ 1.25 ಲಕ್ಷ ರೂ. ಪಡೆದಿದ್ದರು. ಆದರೆ ಅವರ ಮಾತಿನಂತೆ ಶಾಲೆಯಲ್ಲಿ ಸೀಟು ಸಿಗಲಿಲ್ಲ, ಅವರು ಹಣವನ್ನೂ ಹಿಂತಿರುಗಿಸಲಿಲ್ಲ.