"ವಿಶ್ವವಿದ್ಯಾನಿಲಯಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು ಅಂಕಪಟ್ಟಿ ದರವನ್ನು ಅವುಗಳು ಸ್ವತಂತ್ರವಾಗಿ ನಿರ್ಧಾರ ಮಾಡುತ್ತವೆ. ಅಂಕಪಟ್ಟಿ ದರ ನಿಗದಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಯಾವ ಪಾತ್ರವೂ ಇರುವುದಿಲ್ಲ, ಇದರಲ್ಲಿ ಗುತ್ತಿಗೆದಾರರ ಕೈವಾಡವಿರುವ ಸಾದ್ಯತೆ ಇದೆ. ಯಾವುದೋ ಕಾರಣಕ್ಕಾಗಿ ಯ್ರೋ ಹೇಳಿದ್ದಾರೆಂದು, ಸ್ವ ಪ್ರತಿಷ್ಠೆಗಾಗಿ ತಪ್ಪು ಮಾಹಿತಿಗಳೊಂದಿಗೆ ದೂರು ನೀಡುವುದು ಖಂಡನೀಯ, ಈ ಆರೋಪ ಸತ್ಯಕ್ಕೆ ದೂರವಾದದ್ದು, ಅಂಕಪಟ್ಟಿ ವಿಚಾರದಲ್ಲಿ ಯಾವುದೇ ಅಕ್ರಮವಾಗಲೀ, ಭ್ರಷ್ಟಾಚಾರ ಆಗಲಿ ಆಗಿಲ್ಲ" ಎಂದು ಸಚಿವ ರಾಯರೆಡ್ಡಿ ಸ್ಪಷ್ಠನೆ ನೀಡಿದ್ದಾರೆ.